ಪೇಶಾವರದ ಸೈನಿಕ ಶಾಲೆಯಲ್ಲಿ 130 ಕ್ಕೂ ಹೆಚ್ಚು ಅಮಾಯಕ ಮಕ್ಕಳು ಬಲಿಯಾಗಿ ಹೋದರು. ಈ ಭೀಕರ ದಾಳಿಯಲ್ಲಿ ಒಬ್ಬ ಹುಡುಗ ಬದುಕುಳಿದ. 9 ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗ ಈಗ ತನ್ನ ತರಗತಿಗೆ ಒಬ್ಬನೇ ವಿದ್ಯಾರ್ಥಿಯಾಗಿದ್ದಾನೆ. ಆತನ ಸಹಪಾಠಿಗಳೆಲ್ಲರೂ ಗುಂಡಿನ ದಾಳಿಗೆ ಹತರಾಗಿದ್ದಾರೆ. ಆದರೆ ಆತ ಬದುಕುಳಿದಿದ್ದಾನೆ. ಅಷ್ಟಕ್ಕೂ ಆ ಕ್ರೂರಿಗಳ ಕೈಯ್ಯಿಂದ ಆತ ಹೇಗೆ ಬದುಕುಳಿದ...
ಮತ್ತೆ ಶಾಲೆಗೆ ಹೋಗುವ ಕುರಿತು ಯೋಚಿಸಲು ಆತನಿಗೆ ಭಯವಾಗುತ್ತಿದೆ. ಆತ ಮೌನಕ್ಕೆ ಶರಣಾಗಿದ್ದಾನೆ. ಸ್ನೇಹಿತರನ್ನು, ಶಿಕ್ಷಕರನ್ನು ನೆನೆದು ಆತನ ಕಣ್ಣಿನಿಂದ ನೀರು ಜಿನುಗುತ್ತದೆ..ಒಮ್ಮೊಮ್ಮೆ ಭೋರ್ಗರೆದು ಅಳುತ್ತಾನೆ.... ಆತನ ತರಗತಿಯಲ್ಲಿ ಚೆಲ್ಲಿರುವ ಆತನ ಸ್ನೇಹಿತರ ರಕ್ತ ಇನ್ನೂ ಹಸಿಯಾಗಿಯೇ ಇದೆ......