ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಹೊಸ ವಿಧಾನ ಬಳಸುತ್ತಿದ್ದು, ಇತರೆ ಪ್ರದೇಶಗಳಿಗೆ ಹಿಂಸೆಯ ಮಾರ್ಗವನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಕ್ಷಿಪ್ರ ಮತ್ತು ಕಿರು ಯುದ್ಧಗಳಿಗೆ ಭಾರತ ಸಿದ್ಧವಾಗಿದೆ ಎಂದು ಜ.ಸಿಂಗ್ ನಿನ್ನೆ ಹೇಳಿದ್ದರು. ಜ. ಸಿಂಗ್ ಎಚ್ಚರಿಕೆಯನ್ನು ಕೇವಲ ಉತ್ಪ್ರೇಕ್ಷಿತ ಎಂದು ತಳ್ಳಿಹಾಕಿದ ಅವರು ಅಣ್ವಸ್ತ್ರ ನೆರೆಯ ರಾಷ್ಟ್ರಗಳ ನಡುವೆ ಸೀಮಿತ ಯುದ್ಧ ನಡೆಯುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.