ಪಾಕಿಸ್ತಾನದ ಮಾಜಿ ಸೇನಾ ಸರ್ವಾಧಿಕಾರಿ ಪರ್ವೇಜ್ ಮುಷರ್ರಫ್ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಕೈ ಮೇಲಾಗಿತ್ತು ಎನ್ನುವ ಅರ್ಥದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆ ಭಾರತದ ಕುತ್ತಿಗೆ ಹಿಡಿದಿತ್ತು, ಆ ಯುದ್ಧವನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮುಷರ್ರಫ್ ಹೇಳಿದ್ದಾರೆ.
ಅಖಿಲ ಪಾಕಿಸ್ತಾನ ಮುಸ್ಲಿಂ ಲೀಗ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮುಷರ್ರಫ್ , 'ಯೋಧರನ್ನು ಹೊರತು ಪಡಿಸಿ ಎರಡನೇ ದರ್ಜೆ ಪೋರ್ಸ್ ಕೂಡ ನಮ್ಮಲ್ಲಿತ್ತು. ಅದು ನೇರವಾಗಿ ಭಾರತದ ಕುತ್ತಿಗೆಗೆ ಕೈ ಹಾಕಿತ್ತು . ಅದರ ಈ ಸಾಧನೆಯನ್ನು ಮೆಚ್ಚಿ ಅದಕ್ಕೆ ಸೇನೆಯ ಸ್ಥಾನಮಾನ ನೀಡಲಾಯಿತು' ಎಂದು ಕುಟುಕಿದ್ದಾರೆ.