ಗುಜರಾತಿನ ಸಾಬರಮತಿ ಮಾದರಿಯಲ್ಲಿ ಲಾಹೋರ್ನಲ್ಲಿ ರಾವಿ ನದಿ ಕ್ಷೇತ್ರ ಅಭಿವೃದ್ಧಿ ಯೋಜನೆ ಜಾರಿಯಲ್ಲಿದ್ದು, ಈ ಸಂಬಂಧ ಲಾಹೋರ್ ನಿಂದ ಅಧಿಕಾರಿಗಳ ಒಂದು ತಂಡ ಅಹಮದಾಬಾದಿಗೆ ಭೇಟಿ ನೀಡಿತ್ತು. ಅಲ್ಲಿ ಗುಜರಾತ್ ಮಾದರಿ ಕುರಿತು ನಿರೀಕ್ಷಣೆ ನಡೆಸಿದ ಅವರು ಈ ಈ ಮಾದರಿಯ ಅಳವಡಿಕೆ ತುಂಬ ಕಡಿಮೆ ವೆಚ್ಚದ್ದು ಎಂಬುದನ್ನು ಕಂಡುಕೊಂಡಿದ್ದಾರೆ.
ಮೋದಿಯವರ ಗುಜರಾತ್ ಮಾಡೆಲ್ನಿಂದ ಪ್ರಭಾವಿತರಾಗಿದ್ದ ಪಾಕಿಸ್ತಾನ್ ಪ್ರಧಾನಿ ನವಾಜ್ ಶರೀಫ್ ಅವರೇ ಈ ಕುರಿತು ಅಧ್ಯಯನ ನಡೆಸಲು ಅಹಮದಾಬಾದಿಗೆ ತೆರಳುವಂತೆ ಆದೇಶ ನೀಡಿದ್ದರು. ಮೋದಿಯವನ್ನು ಭೇಟಿ ಮಾಡುವ ಮೊದಲೇ ಶರೀಫ್ ಈ ಆದೇಶ ನೀಡಿದ್ದರು. ಲಾಹೋರ್ ಪಾಕ್ ಪ್ರಧಾನಿಯ ತವರು ನಗರವಾಗಿದ್ದು, ರಾವಿ ನದಿ ಕ್ಷೇತ್ರದ ವಿಕಾಶ ಅವರ ಬಹು ನಿರೀಕ್ಷಿತ ಯೋಜನೆಯಾಗಿದೆ.
ಅಹಮದಾಬಾದಿನಿಂದ ಮರಳಿದ ತಂಡದ ಸಾಬರಮತಿ ನದಿ ಪ್ರದೇಶಾಭಿವೃದ್ಧಿ ಯೋಜನೆಯಲ್ಲಾದ ವೆಚ್ಚ, ರಾವಿ ನದಿ ಪ್ರದೇಶ ನಗರಾಭಿವೃದ್ಧಿ ಯೋಜನೆಯ ಅಂದಾಜುವೆಚ್ಚಕ್ಕಿಂತ ಅತಿ ಕಡಿಮೆ ಎಂದು ವರದಿ ನೀಡಿದೆ. ಇದರಿಂದ ನರೇಂದ್ರ ಮೋದಿಯವರ ಜನಪ್ರಿಯತೆ ಭಾರತದ ಜತೆ ಕಡು ವೈರತ್ವ ತೋರುವ ಪಾಕಿಸ್ತಾನದಲ್ಲೂ ಬೆಳಗಲು ಪ್ರಾರಂಭವಾಗಿದೆ.