ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನಡುವೆ ಸೋಮವಾರ ಸೌಹಾರ್ದ ಹಸ್ತಲಾಘವದಿಂದ ಉಪಖಂಡದ ನೆರೆಹೊರೆಯ ದೇಶಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಆಸೆಯನ್ನು ಚಿಗುರಿಸಿದೆ. ಹವಾಮಾನ ವೈಪರೀತ್ಯ ಶೃಂಗಸಭೆಗೆ ಸಂದರ್ಭದಲ್ಲಿ ಪ್ಯಾರಿಸ್ನಲ್ಲಿ ಮೋದಿ ಮತ್ತು ಷರೀಫ್ ಭೇಟಿ ಯಲ್ಲಿ ಹಸ್ತಲಾಘವ ಮಾಡಿದ್ದು ಕ್ರಿಕೆಟ್ ಸರಣಿ ಪುನಾರಂಭದ ಆಸೆಯನ್ನು ಹುಟ್ಟುಹಾಕಿದೆ. ನೆರೆಹೊರೆಯ ದೇಶಗಳ ನಡುವೆ ಸೌಹಾರ್ದ ಸಂಬಂಧ ಬೆಳೆಯಲು ಕ್ರಿಕೆಟ್ ಒಂದು ಮಾಧ್ಯಮ ಎಂದು ವಿಶ್ಲೇಷಕರು ಭಾವಿಸಿದ್ದಾರೆ.
ಭಾರತದ ಸರಣಿಯಿಂದ ಆರ್ಥಿಕ ಲಾಭವಾಗುತ್ತೆಂಬ ಆಸೆ ಇಟ್ಟುಕೊಳ್ಳಬೇಡಿ. ಭಾರತದ ಮಂಡಳಿ ಸದಾ ತನ್ನ ನಿಲುವನ್ನು ಬದಲಿಸುತ್ತಿದ್ದು, ಒಡಂಬಿಕೆ ನಡುವೆಯೂ ನಮ್ಮ ಜತೆ ಆಡದಿರುವುದಕ್ಕೆ ಸಬೂಬುಗಳನ್ನು ಹುಡುಕುತ್ತಿರುವಂತೆ ಕಾಣುತ್ತಿದೆ. ಶ್ರೀಲಂಕಾದಲ್ಲಿ ಕೂಡ ನಮ್ಮ ಜತೆ ಆಡುವುದರಿಂದ ತಪ್ಪಿಸಿಕೊಂಡರೆ ಆಶ್ಚರ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.