ವಾಣಿಜ್ಯ ಸಚಿವ ಕಮಲನಾಥ್‌ಗೆ ವಾರಂಟ್

ಮಂಗಳವಾರ, 25 ಡಿಸೆಂಬರ್ 2007 (17:55 IST)
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಕಮಲ್‌ನಾಥ್ ಅವರಿಗೆ ಸ್ಥಳೀಯ ಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿಮಾಡಿದ್ದು, ಸಾಕ್ಷಿಯಾಗಿ ಹಾಜರಾಗುವಂತೆ ತಿಳಿಸಿದೆ.

ಭೋಪಾಲ್ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಡ್ತಿ ಪಡೆಯಲು ಇಬ್ಬರು ವ್ಯಕ್ತಿಗಳು ಕಮಲನಾಥ್ ಅವರ ನಕಲಿ ಲೆಟರ್‌ಹೆಡ್ ಬಳಸಿದ್ದಕ್ಕೆ ಸಂಬಂಧಪಟ್ಟಂತೆ ಈ ವಾರಂಟ್ ನೀಡಲಾಗಿದೆ.

ನ್ಯಾಯಾಧೀಶ ಲಾಲ್‌ರಾಮಾ ಮೀನಾ ನಾಥ್ ವಿರುದ್ಧ 500 ರೂ. ವಾರಂಟ್ ಜಾರಿಮಾಡಿದ್ದು, ಜನವರಿ 15ರಂದು ಕೋರ್ಟ್‌ಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಬಿಡಿಎ ನೌಕರ ಮೊಹಮದ್ ಸೊಹೇಲ್ ಮತ್ತು ಅವನ ಸಂಗಡಿಗ ರಾಕೇಶ್ ಶ್ರೀವಾಸ್ತವ ಅವರಿಬ್ಬರು ಕಮಲನಾಥ್ ಅವರ ನಕಲಿ ಲೆಟರ್‌ಹೆಡ್ ಬಳಸಿ ಬಡ್ತಿ ಕೋರಿದ್ದಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ