ಆಧಾರ್ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿರುವ ವಿಶಿಷ್ಟಗುರುತು ಪತ್ರ ಪ್ರಾಧಿಕಾರದ ವೆಬ್ಸೈಟ್ ಪ್ರಕಾರ, ಆಧಾರ್ ಕಾರ್ಡ್ಗಳನ್ನು ಈವರೆಗೆ ಒಟ್ಟು 99. 1 ಕೋಟಿಯನ್ನು ವಿತರಿಸಲಾಗಿದೆ. ಪೋರ್ಟಲ್ ಎಣಿಕೆಗಳನ್ನು, ವರದಿಗಳನ್ನು ನಿರ್ವಹಣೆ ಚಟುವಟಿಕೆ ಹಿನ್ನೆಲೆಯಲ್ಲಿ ಪರಿಷ್ಕರಿಸಲಾಗಿಲ್ಲ. ಪೋರ್ಟಲ್ ಸದ್ಯದಲ್ಲೇ ಪರಿಷ್ಕರಿಸಲಾಗುತ್ತದೆ.
ನೇರ ಸೌಲಭ್ಯ ವರ್ಗಾವಣೆ ಯೋಜನೆ ಅಡಿಯಲ್ಲಿ, ವಿದ್ಯಾರ್ಥಿವೇತನ, ಪಿಂಚಣಿ ಮತ್ತು ಅಡುಗೆ ಅನಿಲ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ನಕಲಿ ಫಲಾನುಭವಿಗಳನ್ನು ನಿವಾರಿಸಲು ಮತ್ತು ವಿವಿಧ ಸಾಮಾಜಿಕ ಕ್ಷೇತ್ರ ಯೋಜನೆಗಳ ವೆಚ್ಚದಲ್ಲಿ ಸೋರಿಕೆಯನ್ನು ತಡೆಯುವುದಕ್ಕಾಗಿ ಜನರ ಗುರುತನ್ನು ದೃಢೀಕರಿಸುವ ಅಸ್ತ್ರವಾಗಿ ಆಧಾರ್ ಬಳಸಲು ಸರ್ಕಾರ ಇಚ್ಛಿಸಿದೆ.