ಕೇಂದ್ರ ಹಣಕಾಸು ಸಚಿವ ಜೇಟ್ಲಿಯವರ ನಿರ್ಧಾರವಿಲ್ಲದೇ ದೇಶದ ಆರ್ಥಿಕತೆಯ ಮಾರ್ಗಸೂಚಿಯಿಲ್ಲದೇ ಭಾರತ ಆರ್ಥಿಕ ಯಶಸ್ಸು ಕಾಣಲು ಸಾಧ್ಯವಿಲ್ಲ. ಆದ್ದರಿಂದ, ಜೇಟ್ಲಿಯವರನ್ನು ಏಷ್ಯಾದ ಅತ್ಯುತ್ತಮ ಹಣಕಸು ಸಚಿವ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಮ್ಯಾಗ್ಜಿನ್ ತಿಳಿಸಿದೆ.
ಕಳೆದ 2010ರಲ್ಲಿ ಪ್ರಣಬ್ ಮುಖರ್ಜಿಯವರನ್ನು ಏಷ್ಯಾದ ಅತ್ಯುತ್ತಮ ಹಣಕಾಸು ಸಚಿವ ಎಂದು ಎಮರ್ಜಿಂಗ್ ಮಾರ್ಕೆಟ್ಸ್ ಆಯ್ಕೆ ಮಾಡಿತ್ತು. ಕೇಂದ್ರ ಸರಕಾರ ಒತ್ತಡದಲ್ಲಿ ಸಿಲುಕಿರುವ ಖಾಸಗಿಕರಣ ಕಾರ್ಯಕ್ರಮವನ್ನು ಮುಂದುವರಿಸಿ ಹೂಡಿಕೆ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ ಮಾರಾಟದ ಉದ್ದೇಶವನ್ನು ಸುಲಭವಾಗಿಸಿದಲ್ಲಿ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.