ಬ್ಯಾಂಕಿಂಗ್ ಸೆಕ್ಟರ್ನ ಬ್ಯಾಡ್ಲೋನ್ 10 ಲಕ್ಷ ಕೋಟಿಗೆ ಹೆಚ್ಚಳಶವಾಗಿದ್ದು, ಈ ಪೈಕಿ ಅತಿ ಹೆಚ್ಚು ಬಾಕಿ ಹಣ ಉಳಿಸಿಕೊಂಡಿರುವವರು ಕಾರ್ಪೊರೇಟ್ ವಲಯದವರಾಗಿದ್ದಾರೆ. ಬಾಕಿ ಹಣ ವಸೂಲಿ ಮಾಡಲು ಕೇಂದ್ರ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ವೆಂಕಟಾಚಲಂ ಹೇಳಿದ್ದಾರೆ.
7 ,000 ಉದ್ದೇಶ ಪೂರ್ವಕ ಬಾಕಿದಾರರಿದ್ದು, ಇವರಿಂದ 60 ,000 ಕೋಟಿ ಬಾಕಿ ಹಣ ವಸೂಲಿ ಆಗಬೇಕಿದ್ದು, ಇಂತಹ ಬಾಕಿದಾರರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ವೆಂಕಟಾಚಲಂ ಒತ್ತಾಯಿಸಿದ್ದಾರೆ.