ಐಡಿಬಿಐ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯದ ದೊರೆ ವಿಜಯ್ ಮಲ್ಯ 6,000 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬ್ಯಾಂಕ್ ಒಕ್ಕೂಟ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮಲ್ಯ ಪರ ವಕೀಲರು, ಬ್ಯಾಂಕುಗಳ ಗುರಿ ಹಣ ಹಿಂಪಡೆಯುವುದಲ್ಲ ಬದಲಾಗಿ ಉದ್ಯಮಪತಿಯನ್ನು ಜೈಲಿಗೆ ದೂಡುವ ಉದ್ದೇಶವನ್ನು ಹೊಂದಿವೆ ಎಂದು ವಾದಿಸಿದ್ದಾರೆ.
ಹಿರಿಯ ವಕೀಲರಾದ ಸಿ.ಎಸ್. ವೈದ್ಯನಾಥನ್ ಮತ್ತು ಪರಾಗ್ ತ್ರಿಪಾಠಿ, ಮಲ್ಯ ಪರ ವಾದ ಮಂಡಿಸಿ, ಮಲ್ಯ ಸಾಲ ಬಾಕಿದಾರರಾಗಿದ್ದಾರೆ. ಆದರೆ ಉದ್ದೇಶಪೂರ್ವಕ ಸಾಲ ಬಾಕಿದಾರರಲ್ಲ. ಇದೊಂದು ಉದ್ಯಮದಲ್ಲಿ ನಷ್ಟ ಹೊಂದಿರುವ ಪ್ರಕರಣ ಮಾತ್ರ ಎಂದು ವಾದಿಸಿದರು.