ನೆಸ್ಲೆ ಇಂಡಿಯಾ ಮ್ಯಾಗಿ ನಿಷೇಧದ ವಿರುದ್ಧ ಕಾನೂನು ಸಮರಕ್ಕೆ ಇಳಿದಿರುವ ನಡುವೆ, ಕಂಪನಿಯ ಭಾರತ ಸಿಇಒ ಎಟಿನೆ ಬೆನೆಟ್ ಜುಲೈ 25ರಂದು ಎತ್ತಂಗಡಿ ಆಗಲಿದ್ದಾರೆ. ಮುಂಬೈ ಷೇರು ಪೇಟೆಗೆ ಕಂಪನಿ ಸಲ್ಲಿಸಿದ ಫೈಲಿಂಗ್ನಲ್ಲಿ ಪ್ರಸಕ್ತ ನೆಸ್ಲೆ ಫಿಲಿಪ್ಪೀನ್ಸ್ ಚೇರ್ ಮನ್ ಮತ್ತು ಸಿಇಒ ಆಗಿರುವ ಸುರೇಶ್ ನಾರಾಯಣ್ ಅವರು ಅಧಿಕೃತವಾಗಿ ಭಾರತದ ಕಾರ್ಯನಿರ್ವಹಣೆಯನ್ನು ಆಗಸ್ಟ್ ಒಂದರಿಂದ ವಹಿಸಿಕೊಳ್ಳಲಿದ್ದಾರೆ. ಅಲ್ಲಿವರೆಗೆ ಅವರು ನಿಯೋಜಿತರಾಗಿ ಕಾರ್ಯನಿರ್ವಹಿಸುತ್ತಾರೆ.