ಕೇಂದ್ರ ಸರಕಾರದ ವಿವೇಚನೆಯಿಲ್ಲದ ನಿರ್ಧಾರದಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಕಪ್ಪು ಹಣ ಹೊಂದಿದವರು ತಮ್ಮ ಹಣವನ್ನು ವೈಟ್ ಹೇಗೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದರೆ, ಕೆಲವರು ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದ ಹಣವನ್ನು ಪಡೆಯುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ.
ವರದಿಗಳ ಪ್ರಕಾರ, ಹಲವು ಗಂಟೆಗಳಿಂದ ಎಟಿಎಂನಲ್ಲಿ ಹಣ ಪಡೆಯಲು ಸರದಿಗಾಗಿ ಗ್ರಾಹಕರು ಕಾಯುತ್ತಾ ನಿಂತಿದ್ದರು ಎನ್ನಲಾಗಿದೆ. ಆದರೆ,ಯುವತಿ ಬೇಸತ್ತು ತನ್ನ ಟಿ-ಶರ್ಟ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಪ್ರಧಾನಿ ಮೋದಿಯ ನಿರ್ಧಾರವನ್ನು ಲಕ್ಷಾಂತರ ಜನರು ಸ್ವಾಗತಿಸಿದರೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾಸ್ತವತೆ ಭಿನ್ನವಾಗಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ.