ಬಡ್ಡಿದರ ಕಡಿತ: ಅರುಣ್ ಜೇಟ್ಲಿಯಿಂದ ರಘುರಾಮ್ ರಾಜನ್ ಭೇಟಿ

ಗುರುವಾರ, 27 ನವೆಂಬರ್ 2014 (20:05 IST)
ಮುಂದಿನ ವಾರ ರಿಸರ್ವ್ ಬ್ಯಾಂಕ್ ಪಾಲಿಸಿ ಸಭೆ ಮಾಡುತ್ತಿರುವ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರನ್ನು ಡಿ.1ರಂದು ಭೇಟಿ ಮಾಡಿ ಬಡ್ಡಿದರಗಳಲ್ಲಿ ಕಡಿತ ಮಾಡುವಂತೆ ಒತ್ತಾಯಿಸಲಿದ್ದಾರೆ.
 
ಬಡ್ಡಿದರ ಇಳಿಕೆಯಿಂದ ವಾಹನೋದ್ಯಮ ಮತ್ತು ಗೃಹನಿರ್ಮಾಣ ಕ್ಷೇತ್ರಗಳಿಗೆ ನೆರವಾಗುತ್ತದೆ ಎಂದು ಮೂಲವೊಂದು ತಿಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದ ಒಟ್ಟು ದೇಶೀಯ ಉತ್ಪನ್ನದ ಅಂಕಿಅಂಶಗಳಲ್ಲಿ ಮುಂಚಿನ ತ್ರೈಮಾಸಿಕಕ್ಕಿಂತ ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದನ್ನು ತೋರಿಸಿದೆ ಎಂದು ಮೂಲಗಳು ಹೇಳಿವೆ. 

ವೆಬ್ದುನಿಯಾವನ್ನು ಓದಿ