ಐಐಟಿ ಹಳೆ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳ ಕೂಟ ಮತ್ತು ಇತರ ಪ್ರಮುಖ ಸಂಸ್ಥೆಗಳಾದ ರಾಷ್ಟ್ರೀಯ ಕಾನೂನು ವಿವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರೈಲ್ವೆಯಲ್ಲಿ ಅನೇಕ ಸವಾಲುಗಳಿದ್ದು, ಅದನ್ನು ಪರಿಹರಿಸಬೇಕಿದೆ. ಆದರೆ ಅದನ್ನು ನಿಭಾಯಿಸುವುದು ಹೇಗೆ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.
ನೀರಿನ ಕೊರತೆ ಸಮಸ್ಯೆಯಾಗಿರುವುದರಿಂದ ನೀರನ್ನು ಬಳಸದೇ ಅಥವಾ ಕಡಿಮೆ ನೀರನ್ನು ಬಳಸಿ ದುರ್ವಾಸನೆರಹಿತ ಟಾಯ್ಲೆಟ್ ನಿರ್ಮಾಣ ಸಾಧ್ಯವೇ ಎಂದು ಸುರೇಶ್ ಪ್ರಭು ಪ್ರಶ್ನಿಸಿದರು. ರೈಲಿನಲ್ಲಿ ಟಿಕೆಟಿಲ್ಲದೇ ಪ್ರಯಾಣವನ್ನು ಪ್ರಸ್ತಾಪಿಸಿ, ಟಿಕೆಟ್ ರಹಿತ ಪ್ರಯಾಣವನ್ನು ತಪ್ಪಿಸುವುದು ಹೇಗೆ, ಅದಕ್ಕೆ ಪೂರ್ಣಸ್ವರೂಪದ ಪರಿಹಾರವಿದೆಯೇ ಎಂದು ಪ್ರಶ್ನಿಸಿದರು.