ಅಂತರ್ಜಾಲದ ಮೂಲಕ ಮತದಾನ ಮಾಡುವುದು ಭವಿಷ್ಯದ ಸಾಧ್ಯತೆಯಾಗಲಿದೆ ಎಂದು ಮುಖ್ಯ ಚುನಾವಣೆ ಆಯುಕ್ತ ಎಚ್.ಎಸ್. ಬ್ರಹ್ಮ ಹೇಳಿದ್ದು, ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷರಹಿತವನ್ನಾಗಿ ಮಾಡುವುದು ಎಂದು ತಿಳಿಸಿದ್ದಾರೆ.
ಅಂತರ್ಜಾಲದ ವೋಟಿಂಗ್ ಬಹಳಷ್ಟು ಸಮಯ, ಸಂಪನ್ಮೂಲಗಳು ಮತ್ತು ಶಕ್ತಿಯನ್ನು ಉಳಿಸುತ್ತದೆ ಎಂದು ಬ್ರಹ್ಮ ಹೇಳಿದರು.ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸರತಿಸಾಲಿನಲ್ಲಿ ನಿಂತಿದ್ದಾಗ ಐವರು ಯುವ ಮತದಾರರು ವೋಟ್ ಮಾಡುವುದಕ್ಕೆ ಕೆಲವೇ ಸೆಕೆಂಡುಗಳು ಸಾಕಾದರೂ ಕ್ಯೂನಲ್ಲಿ 2 ಗಂಟೆ ನಿಲ್ಲುವುದು ಕಷ್ಟದ ಕೆಲಸ ಎಂದು ಹೇಳಿದರು.