ಆರ್ಥಿಕತೆ ಸುಧಾರಣೆಯಾದರೆ ಆದಾಯತೆರಿಗೆಯಲ್ಲಿ ಹೆಚ್ಚು ವಿನಾಯಿತಿ: ಜೇಟ್ಲಿ

ಶುಕ್ರವಾರ, 28 ನವೆಂಬರ್ 2014 (18:21 IST)
ಮುಂದಿನ ವರ್ಷ ಆರ್ಥಿಕತೆಯಲ್ಲಿ ಸುಧಾರಣೆಯಾದರೆ, ಆದಾಯತೆರಿಗೆಯಲ್ಲಿ ಹೆಚ್ಚು ವಿನಾಯಿತಿಗಳನ್ನು ನೀಡುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಭರವಸೆ ನೀಡಿದ್ದಾರೆ.

ಹಿಂದಿನ ಸರ್ಕಾರದ ಅಧಿಕ ತೆರಿಗೆ ಕ್ರಮದಿಂದ ಹಣದುಬ್ಬರ ಏರಿಕೆಯಾಯಿತು ಎಂದು ಟಿವಿ ಚಾನೆಲ್ ಶೋನಲ್ಲಿ ಬಜೆಟ್‌ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು. ಕೇಂದ್ರದ ಬೊಕ್ಕಸದಲ್ಲಿ ಹೆಚ್ಚು ಹಣವಿದ್ದಿದ್ದರೆ ನಾನು ಹೆಚ್ಚು ಪರಿಹಾರಗಳನ್ನು ನೀಡುತ್ತಿದ್ದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಹೆಚ್ಚು ಹಣ ಒದಗಿದರೆ ನಾನು ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸುತ್ತೇನೆ ಎಂದು ಅವರು ಹೇಳಿದರು.

 ಎಲ್ಲಾ ಮೂರು ವರ್ಗದ ತೆರಿಗೆದಾರರಿಗೆ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡಿದ ಪ್ರಥಮ ಬಜೆಟ್ ನಮ್ಮದಾಗಿದೆ ಎಂದು ಜೇಟ್ಲಿ ನುಡಿದರು. 

ವೆಬ್ದುನಿಯಾವನ್ನು ಓದಿ