ಪ್ರಯಾಣ ದರವನ್ನು ಹೆಚ್ಚಿಸಿ ಪ್ರಯಾಣಿಕರ ಮೇಲೆ ಹೆಚ್ಚು ಹೊರೆ ಹೇರಲಿಲ್ಲ. ಆದರೆ ಹಣ ಕ್ರೋಢೀಕರಣಕ್ಕಾಗಿ ಸರಕು ಸಾಗಣೆ ದರದಲ್ಲಿ ಬದಲಾವಣೆ ಮಾಡಿದರು.ವಾಸ್ತವವಾಗಿ ಅವರು ಯಾವುದೇ ಹೊಸ ರೈಲುಗಳ ಸಂಚಾರವನ್ನು ಪ್ರಕಟಿಸದೇ ಸರಕು ಸಾಗಣೆ ದರಗಳಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿದರು. ಉಪ್ಪನ್ನು ಹೊರತುಪಡಿಸಿ, ಸಿಮೆಂಟ್, ಕಲ್ಲಿದ್ದಲು, ಕೋಕ್, ಉಕ್ಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸರಕು ಸಾಗಣೆ ದರ ಹೆಚ್ಚಿಸಿದರು.
ತಮ್ಮ ಒಂದು ಗಂಟೆಯ ಭಾಷಣದಲ್ಲಿ ಪ್ರಭು ರೈಲ್ವೆ ಆರ್ಥಿಕತೆಯ ಮುಖ್ಯ ಚಾಲಕಶಕ್ತಿಯಾಗುವ ಖಾತರಿ ನೀಡಿದರು. ಹೆಚ್ಚಿನ ಹೂಡಿಕೆಗೆ ಸಂಪನ್ಮೂಲ ಸಂಗ್ರಹ, ರೈಲುಗಳ ವೇಗ ಹೆಚ್ಚಳ, ಪ್ರಯಾಣಿಕರ ಸೌಲಭ್ಯಗಳು ಮತ್ತು ಸುರಕ್ಷತೆಗೆ ತಮ್ಮ ಬಜೆಟ್ನಲ್ಲಿ ಹೆಚ್ಚಿನ ಮಹತ್ವ ನೀಡಿದರು.