ಮಾನವ ಜೀವನದ ಅವಿಭಾಜ್ಯ ಭಾಗವಾಗಿರುವ ತಂತ್ರಜ್ಞಾನ, ಕೃಷಿ ಕ್ಷೇತ್ರವನ್ನು ಆವರಿಸಿಕೊಂಡಿದೆ. ರಾಷ್ಟ್ರೀಯ ಭತ್ತ ಸಂಶೋಧನೆ ಸಂಸ್ಥೆ (ಎನ್ಆರ್ಆರ್ಐ) ಕೃಷಿ ಪದ್ಧತಿಗಳ ಮಾಹಿತಿ ಸಂಬಂಧಿತ "ರೈಸ್ಎಕ್ಸ್ಪರ್ಟ್" ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದೆ.
ಈ ಹೊಸ ವೈಶಿಷ್ಟ್ಯದ ಅಪ್ಲಿಕೇಶನ್ ರೈತರಿಗೆ ವಿವಿಧ ಕೃಷಿ ಕ್ಷೇತ್ರದಲ್ಲಿ ಕೀಟದ ಪಿಡುಗು, ಪೋಷಕಾಂಶ, ಕಳೆ, ನೆಮಟೋಡ್ ಮತ್ತು ಬೆಳೆ ರೋಗ-ಸಂಬಂಧಿತ ಪರಿಹಾರವನ್ನು ನೈಜ ಸಮಯದಲ್ಲಿ ನೀಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಿಳಿಸಿದ್ದಾರೆ.
ಪಿಟಿಐ ವರದಿಗಳ ಪ್ರಕಾರ, ಈ ಹೊಸ ವೈಶಿಷ್ಟ್ಯದ ಮೊಬೈಲ್ ಆಪ್ ವೆಬ್ ಆಧಾರಿತ ಅಪ್ಲಿಕೇಶನ್ ಆಗಿದ್ದು, ಈ ಆಪ್ ಮೂಲಕ ರೈತರು ತಮ್ಮ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಫಾರ್ಮ್ ವಿಜ್ಞಾನಿಗಳಿಂದ ಸುಗಮ ಪರಿಹಾರ ಪಡಿದುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.