ತಾಯಿ ನಿಧನದ ಹಿನ್ನಲೆಯಲ್ಲಿ ಈಗಾಗಲೇ ಒಂದು ತಿಂಗಳ ಅವಧಿಗೆ ಪೆರೋಲ್ ಪಡೆದಿರುವ ಸುಬ್ರತಾರಾಯ್ ಗೆ ಜುಲೈ 11ರೊಳಗೆ ಸೆಬಿಗೆ 200 ಕೋಟಿ ರು.ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಒಂದು ವೇಳೆ ಪಾವತಿಸದಿದ್ದರೆ ಪೆರೋಲ್ ಹಿಂಪಡೆಯಲಾಗುವುದು ಎಂದು ಎಚ್ಚರಿಸಿದೆ.
ಸಹರಾ ಸಂಸ್ಥೆ, 3 ಕೋಟಿ ಶೇರುದಾರರಿಗೆ ವಂಚನೆ ಮಾಡಿದ ಆರೋಪದ ಮೇಲೆ ಸುಬ್ರಾತ್ ರಾಯ್ ಅವರನ್ನು ಬಂಧಿಸಿ, 2014 ರ ಮಾರ್ಚ್ 4ರಂದು, ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು.