87ನೇ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟದ 87ನೇ ಎಜಿಎಂ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಇಂದು ನಮ್ಮ ನಡುವೆ ಸ್ಪಷ್ಟ ಆಯ್ಕೆಯಿದೆ. ಸುಧಾರಣೆಯಾಗಿ ಅಥವಾ ಬಸ್ ಮಿಸ್ ಮಾಡಿಕೊಂಡು ಅವಕಾಶ ಕಳೆದುಕೊಳ್ಳಿ. ನಾವು ಸುಧಾರಣೆಯ ಬಸ್ ತಪ್ಪಿಸಿಕೊಂಡರೆ ಭವಿಷ್ಯದ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ವಿದೇಶಿ ಹೂಡಿಕೆದಾರರು ಈ ಕುರಿತು ಸುದೀರ್ಘಕಾಲದಿಂದ ಕಾಯುತ್ತಿದ್ದು, ಸುಧಾರಣೆಗೆ ಬದ್ಧವಾದ ಸರ್ಕಾರ ವಿಮಾ ವಲಯದ ಸುಧಾರಣೆ ಸಾಧ್ಯವಾಗುತ್ತಿಲ್ಲ ಎಂಬ ಸತ್ಯದಿಂದ ಅಚ್ಚರಿಗೊಂಡಿದ್ದಾರೆ. ಇದೊಂದು ಸವಾಲಾಗಿದ್ದು, ನಾವು ಇದನ್ನು ಮುಂದುವರಿಸಲು ಅವಕಾಶ ನೀಡಬೇಕೇ ಎಂದು ಪ್ರಶ್ನಿಸಿದ್ದಾರೆ.