ರಾಮ್‌ಗೋಪಾಲ್‌ ವರ್ಮಾ ಟ್ವೀಟ್‌ಗೆ ನಟ ಜಗ್ಗೇಶ್ ಪ್ರತಿಕ್ರಿಯೆ

ಶನಿವಾರ, 20 ಮೇ 2017 (13:55 IST)
ಕರ್ನಾಟಕದಲ್ಲಿ ಬಾಹುಬಲಿ- 2 ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು, ಈ ಬಗ್ಗೆ ಪ್ರಸ್ತಾಪಿಸಿ ಕನ್ನಡಿಗರಿಗೆ ಸ್ವಾಭಿಮಾನವಿಲ್ಲ  ಎಂಬ ಹೇಳಿಕೆ ನೀಡಿದ್ದ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕಮೆಂಟ್‌ಗೆ ನವರಸ ನಾಯಕ ಜಗ್ಗೇಶ್‌ ಪ್ರತಿಕ್ರಿಯಿಸಿದ್ದಾರೆ.
 
ಈ ಬಗ್ಗೆ ಟ್ವೀಟ್‌ ಮಾಡಿರೋ ಜಗ್ಗೇಶ್‌, 'ಯಾವಾಗ ನಮ್ಮ ಮನೆಯವರ ಬಗ್ಗೆ ನಮಗೆ ಅಭಿಮಾನವಿಲ್ಲಾ! ಯಾವಾಗ ನಮ್ಮ ಮನೆಗೆ ಬೇಲಿಯಿಲ್ಲಾ! ಆಗ ದಾರಿಯಲ್ಲಿನ ಬಿಡಾಡಿ ನಾಯಿಗಳು ನಮ್ಮ ಜಾಗಕ್ಕೆ ಪ್ರವೇಶ ಮಾಡಿ ನಮ್ಮ ನೋಡಿ ಬೊಗಳುತ್ತೆ! RGV' ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ