ನಟ ನೀನಾಸಂ ಸತೀಶ್ ಈಗ ಗಾಯಕ

ಗುರುವಾರ, 24 ಫೆಬ್ರವರಿ 2022 (09:20 IST)
ಬೆಂಗಳೂರು: ನಟ ನೀನಾಸಂ ಸತೀಶ್ ನಟನಾಗಿ, ತಂತ್ರಜ್ಞನಾಗಿ ಮಿಂಚಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಹಾಡುಗಾರನಾಗಿ ಅವರು ನಿಮ್ಮ ಮುಂದೆ ಬರಲಿದ್ದಾರೆ.

ಅಶರೀರವಾಣಿ ಎಂಬ ಆಲ್ಬಂಗಾಗಿ ನೀನಾಸಂ ಸತೀಶ್ ಹಾಡೊಂದನ್ನು ಹಾಡಿದ್ದು ಈ ಗೀತೆ ಇಂದು ಬಿಡುಗಡೆಯಾಗುತ್ತಿದೆ.  ಸ್ವತಃ ನೀನಾಸಂ ಸತೀಶ್ ಈ ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ ಈ ಹಾಡಿನಲ್ಲಿ ಸತೀಶ್ ಜೊತೆಗೆ ಅವರ ಪುತ್ರಿ ಮನಸ್ವಿತ ಕೂಡಾ ಸಾಥ್ ನೀಡಿದ್ದಾರೆ.  ತಂದೆಯ ಹಾಡಿಗೆ ಡ್ರಮ್ ನುಡಿಸುತ್ತಾ ಮನಸ್ವಿತ ಸಾಥ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ