ನಟ ಸುಶಾಂತ ಸಿಂಗ್ ರದ್ದು ನರಹತ್ಯೆ ಕೇಸ್ ?

ಮಂಗಳವಾರ, 15 ಸೆಪ್ಟಂಬರ್ 2020 (22:21 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರದ್ದು ನರಹತ್ಯೆ ಕೇಸ್ ಆಗಿದೆ.

ಹೀಗಂತ ನಟ ಸುಶಾಂತ ಸಿಂಗ್ ರ ಸ್ನೇಹಿತ, ನಟ ದೀಪಕ್ ಖಾಜೀರ್ ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.
ಸಿಬಿಐ ತನಿಖೆಯ ಪ್ರಾರಂಭದಿಂದಲೇ, ನಟನ ಸಾವು ಆತ್ಮಹತ್ಯೆಯಲ್ಲ ಎಂದು ಅವರು ಹೇಳಿದ್ದರು.

ಏತನ್ಮಧ್ಯೆ, ನಟನ ಸಾವಿನ ಕೇಸ್ ಬಗ್ಗೆ ಸಿಬಿಐ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ. ಎನ್‌ಸಿಬಿ ಸುಶಾಂತ್‌ನ ಗೆಳತಿ ರಿಯಾ ಚಕ್ರವರ್ತಿಯನ್ನು ವಶಕ್ಕೆ ತೆಗೆದುಕೊಂಡರೆ, ಸಿಬಿಐ ಮತ್ತು ಇಡಿ ಈ ಪ್ರಕರಣದಲ್ಲಿ ಆರ್ಥಿಕ ಕೋನವನ್ನು ಪರೀಕ್ಷಿಸಲು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.

ನಟ ಸುಶಾಂತ ಸಿಂಗ್ ರ ಹಣಕಾಸಿನ ವಿಷಯಗಳ ಮೇಲೆ ರಿಯಾ ಚಕ್ರವರ್ತಿ ನಿಯಂತ್ರಣ ಹೊಂದಿದ್ದಳು ಎಂಬ ಆರೋಪವೂ ಕೇಳಿಬರತೊಡಗಿವೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ