ತಾನು ಈ ರಾಜ್ಯದ ಸಿಎಂ ಆಗಲು ಬಯಸುತ್ತೇನೆ ಎಂದ ನಟ ಉಪೇಂದ್ರ

ಮಂಗಳವಾರ, 25 ಮೇ 2021 (09:12 IST)
ಬೆಂಗಳೂರು : ನಟ ಉಪೇಂದ್ರ ಭಾರತದ ಚಲನಚಿತ್ರೋದ್ಯಮದ ಖ್ಯಾತ ನಟರಲ್ಲಿ ಒಬ್ಬರು. ಇವರು ತನ್ನದೇ ಆದ ಪಕ್ಷ ಪ್ರಜಾಕೀಯವನ್ನು ಪ್ರಾರಂಭಿಸಿದಾಗಿನಿಂದಲೂ ಅವರ ಅಭಿಮಾನಿಗಳು ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ವಿವಿಧ ವಿಷಯಗಳ ಬಗ್ಗೆ ಧ್ವನಿ ಎತ್ತುವ ಬಗ್ಗೆ ನಿರ್ಧಾರಗಳನ್ನು ಪ್ರಕಟಿಸಲು ಕಾಯುತ್ತಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಉಪೇಂದ್ರ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ತಾನು  ರಾಜ್ಯದ ಸಿಎಂ ಆಗಲು ಬಯಸುತ್ತೇನೆ ಎಂದು ಬರೆದಿದ್ದಾರೆ. ಅಲ್ಲದೇ ತಾನು ಸ್ಪರ್ಧಿಸಿದರೆ ತನ್ನನ್ನು ಚುನಾವಣೆಯಲ್ಲಿ ಆಯ್ಕೆ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸಿಎಂ ಆದರೆ ನಾನು ಸಾಮಾಜಿಕ ಸೇವೆ ಮಾಡುವುದಾಗಿ ತಿಳಿಸಿದ್ದಾರೆ.

ಆದರೆ ಕೊನೆಯಲ್ಲಿ ಮಾತ್ರ ನೀವು ನನ್ನನ್ನು ಆಯ್ಕೆ ಮಾಡುತ್ತೀರೋ ಇಲ್ಲವೋ ಗೊತ್ತಿಲ್ಲ,. ಆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ  ಎಂದು ಹೇಳಿದ್ದಾರೆ. ನಾನು ನಿಮ್ಮೊಂದಿಗೆ ಖಾಯಂ ಸಿಎಂ (ಸಾಮಾನ್ಯ ಮನುಷ್ಯ)ಆಗಿ ಇರುತ್ತೇನೆ ಎಂದು ಮುಕ್ತಾಯಗೊಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ