ಆಂಧ್ರದಲ್ಲಿ ಕೊರೊನಾ ರೋಗಿಗಳು ಬೆಂಕಿಗಾಹುತಿ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ವಿವಾದ ಎಬ್ಬಿಸಿದ ನಟ

ಸೋಮವಾರ, 17 ಆಗಸ್ಟ್ 2020 (10:11 IST)
ಹೈದರಾಬಾದ್ : ಆಂಧ್ರ ಪ್ರದೇಶದಲ್ಲಿ ಕೊರೊನಾ ಆಸ್ಪತ್ರೆಯನ್ನಾಗಿ ಮಾಡಿದ ಹೋಟೆಲ್ ಒಂದಕ್ಕೆ ಬೆಂಕಿ ಬಿದ್ದು ಕೊರೊನಾ ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೆಲುಗಿನ ನಟರೊಬ್ಬರು ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಹೌದು. ಈ ಹಿಂದೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ  ಕೊರೊನಾ ಆಸ್ಪತ್ರೆಯನ್ನಾಗಿ ಮಾಡಿದ ಹೋಟೆಲ್ ಒಂದಕ್ಕೆ ಬೆಂಕಿ ಬಿದ್ದು 10 ಮಂದಿ ಸುಟ್ಟು ಭಸ್ಮವಾಗಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು,  ಆಸ್ಪತ್ರೆ, ಸರ್ಕಾರ, ಹೋಟೆಲ್ ಮೇಲೆ ಆರೋಪ ಮಾಡಲಾಗಿತ್ತು.

ಇದೀಗ ತೆಲುಗಿನ ನಟ ರಾಮ್ ಪೋತಿನೇನಿ ಈ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ. ಕೊರೊನಾ ಆಸ್ಪತ್ರೆಯನ್ನಾಗಿ ಮಾಡಿದ ಹೋಟೆಲ್ ನಲ್ಲಿ ಪೀಸ್ ನ್ನು ಹೋಟೆಲ್ ನವರೇ ತೆಗೆದುಕೊಳ್ಳುತ್ತಿದ್ದರು. ಅವರೇ ನಿರ್ವಹಣೆ ಮಾಡುತ್ತಿದ್ದರು. ಇದಕ್ಕೆ ವೈದ್ಯರು ಜವಬ್ದಾರರಲ್ಲ. ಈ ಬೆಂಕಿ ಅವಘಡ ಆಕಸ್ಮಿಕವಲ್ಲ. ಈ ಅವಘಡದ ಹಿಂದೆ ಆಂಧ್ರದ ಸಿಎಂ ಗೆ ಕಪ್ಪು ಮಸಿ ಬಳಿಯುವ ಯತ್ನ ಅಡಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ