ನಟಿ ಅಮೂಲ್ಯ ಮದುವೆ ಮಾಡಿಸಿ ವಿವಾದಕ್ಕೆ ಸಿಲುಕಿದ ನಟ ಗಣೇಶ್ ದಂಪತಿ

ಶನಿವಾರ, 20 ಮೇ 2017 (09:06 IST)
ಬೆಂಗಳೂರು: ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಪುತ್ರನ ಜತೆಗೆ ನಟಿ ಅಮೂಲ್ಯ ವಿವಾಹವಾಗಿತ್ತು. ಆದರೆ ಮದುವೆಗೆ ಮುಖ್ಯ ಕಾರಣರಾಗಿದ್ದ ನಟ ಗಣೇಶ್ ದಂಪತಿ ಇದೀಗ ವಿವಾದಕ್ಕೀಡಾಗಿದ್ದಾರೆ.

 
ಗಣೇಶ್ ಪತ್ನಿ ಶಿಲ್ಪಾ ಬಿಜೆಪಿ ಕಾರ್ಯಕರ್ತೆ. ಅಮೂಲ್ಯ ಮಾವ ಕೂಡಾ ಬಿಜೆಪಿಯ ಮಾಜಿ ಕಾರ್ಪೋರೇಟರ್. ಹೀಗಾಗಿ ರಾಜರಾಜೇಶ್ವರಿ ನಗರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿರುವ ಶಿಲ್ಪಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮದುವೆ ಮಾಡಿಸಿದರು ಎಂದು ಗಾಸಿಪ್ ಹಬ್ಬಿತ್ತು.

ಇದಕ್ಕೆ ಉತ್ತರಿಸಿರುವ ಗಣೇಶ್, ಎಂಎಲ್ಎ ಟಿಕೆಟ್ ಗಾಗಿ ನಮಗೆ ಮದುವೆ ಮಾಡಿಸುವ ಅಗತ್ಯವಿರಲಿಲ್ಲ. ನಮಗೆ ಎರಡೂ ಕುಟುಂಬದವರ ಪರಿಚಯವಿದ್ದ ಕಾರಣ ಒಂದು ಮಾಡಿಸಿದೆವು. ಇತ್ತೀಚೆಗೆ ಯಾಕೋ ಜನ ಒಳ್ಳೆಯ ಕೆಲಸ ಮಾಡಿದರೂ ತಪ್ಪು ಕಂಡುಹುಡುಕುತ್ತಾರೆ ಎಂದು ಗಣೇಶ್ ಸ್ಪಷ್ಟನೆ ನೀಡಿದ್ದಾರೆ.

ನಟಿ ಅಮೂಲ್ಯ ಕೂಡಾ ಗಣೇಶ್ ರಕ್ಷಣೆಗೆ ಬಂದಿದ್ದು, ನಮ್ಮ ಮೇಲಿನ ಪ್ರೀತಿಯಿಂದ ಗಣೇಶ್ ಸರ್ ಮತ್ತು ಶಿಲ್ಪಾ ಮೇಡಂ ನಮ್ಮನ್ನು ಒಂದು ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ