ನಟಿ ಕಂಗನಾ ರಣಾವತ್ ಗೆ ಬಿಜೆಪಿ ಬೆಂಬಲ? ಶಿವಸೇನೆ ಸಿಡಿಮಿಡಿ

ಭಾನುವಾರ, 13 ಸೆಪ್ಟಂಬರ್ 2020 (19:34 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಶಿವಸೇನೆ ನಡುವೆ ಕದನ ತಾರಕಕ್ಕೇ ಏರಿದೆ.

ಈ ನಡುವೆ ಕಂಗನಾ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ಸೀಮಿತವಾಗಿದ್ದ ವಾರ್ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಶಿವಸೇನೆ ನಾಯಕ ಸಂಜಯ್ ರಾವತ್ ಮಾತನಾಡಿದ್ದು, ಮುಂಬೈಗೆ ಅವಮಾನ ಮಾಡಿದ ಕಂಗನಾ ರಣಾವತ್ ಅವರನ್ನು ಬಿಜೆಪಿ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದರೂ ಬಿಜೆಪಿಯು ಕಂಗನಾ ರಣಾವತ್  ಅವರನ್ನು ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಬಿಹಾರ ಚುನಾವಣೆಗಳ ಮೇಲೆ ಬಿಜೆಪಿಯವರು ಕಣ್ಣಿಟ್ಟಿದ್ದಾರೆ ಎಂದಿದ್ದಾರೆ.

ಸೇನಾ ಮುಖವಾಣಿ 'ಸಾಮನಾ'ದಲ್ಲಿ ತನ್ನ ಸಾಪ್ತಾಹಿಕ ಅಂಕಣ ರೋಖೋಕ್ ನಲ್ಲಿ, ಮುಂಬೈನ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ವ್ಯವಸ್ಥಿತ ಪ್ರಯತ್ನವಿದೆ ಎಂದು ರಾವತ್ ಹೇಳಿದ್ದಾರೆ. ಮುಂಬೈ ನಗರವನ್ನು ನಿರಂತರವಾಗಿ ದೂಷಿಸುವುದು ಆ ಪಿತೂರಿಯ ಭಾಗವಾಗಿದೆ ಎಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ