ಭೇಟಿಗೆ ಬಂದ ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ ಡಿಬಾಸ್

Sampriya

ಸೋಮವಾರ, 24 ಜೂನ್ 2024 (16:09 IST)
photo Courtesy Instagram
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್, ಚಿತ್ರಹಿಂಸೆ ಹಾಗೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇನ್ನೂ ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ವಿಜಯಲಕ್ಷ್ಮೀ ಅವರು ಮಾಧ್ಯಮದವರು ಇರುವುದನ್ನು ಗಮನಸಿ ಅರ್ಧದಲ್ಲೇ ಹಿಂದೆಕ್ಕೆ ಹೋಗಿದ್ದಾರೆ. ಮತ್ತೇ ಬೇರೆ ವಾಹನದಲ್ಲಿ ಬಂದು ಪತಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪತಿ ಜತೆ ಮುಂದಿನ ಕಾನೂನು ಕ್ರಮದ ಬಗ್ಗೆ ವಿಜಯಲಕ್ಷ್ಮೀ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪುತ್ರ ವಿನೀಶ್‌ನನ್ನು ನೋಡುತ್ತಿದ್ದ ಹಾಗೇ ದಾಸ ಭಾವುಕರಾಗಿ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರಂತೆ.  ಇನ್ನೂ ವಿಜಯಲಕ್ಷ್ಮೀ ಅವರ ಜತೆ ನಡೆದ ದುರಂತದ ಬಗ್ಗೆ ದರ್ಶನ್ ಅವರು ವಿವರಿಸಿದ್ದಾರೆ. ಇನ್ನೂ ದರ್ಶನ್‌ಗೆ  ಪತ್ನಿ ವಿಜಯಲಕ್ಷ್ಮೀ ಸಮಾಧಾನ ಹೇಳಿದ್ದಾರೆ.

ವಿನೋಧ್ ಪ್ರಭಾಕರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಇನ್ನೂ ದರ್ಶನ್ ಅವರು ಮಾಮೂಲಿಯಾಗಿ ' ಟೈಗರ್' ಎಂದು ಕರೆಯುತ್ತಾರೆ. ಅದರಂತೆ ಏನ್ ಟೈಗರ್ ಎಂದು ಕರೆದರು. ಬೇರೆನೂ ಮಾತನಾಡಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ