ದರ್ಶನ್ ಪ್ರಕರಣದ ಬೆನ್ನಲ್ಲೇ ಧ್ರುವ ಸರ್ಜಾ ಮ್ಯಾನೇಜರ್ ಅರೆಸ್ಟ್

Krishnaveni K

ಮಂಗಳವಾರ, 10 ಸೆಪ್ಟಂಬರ್ 2024 (10:49 IST)
ಬೆಂಗಳೂರು: ಒಂದೆಡೆ ಸ್ಯಾಂಡಲ್ ವುಡ್ ನಲ್ಲಿ ನಟ ದರ್ಶನ್  ಪ್ರಕರಣ ಸದ್ದು ಮಾಡುತ್ತಿದ್ದರೆ ಇತ್ತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮ್ಯಾನೇಜರ್ ಅರೆಸ್ಟ್ ಆಗಿರುವ ಸುದ್ದಿ ಕೇಳಿಬರುತ್ತಿದೆ.

ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬಂಧನಕ್ಕೊಳಗಾಗಿದ್ದಾರೆ. ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಧ್ರುವ ಮ್ಯಾನೇಜರ್ ಅಶ್ವಿನ್ ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣ ನಡೆದಿದ್ದು ಮೇ ಕೊನೆಯ ವಾರದಲ್ಲಿ. ಪ್ರಶಾಂತ್ ಪೂಜಾರಿ ಮೇಲೆ ಹರ್ಷ ಮತ್ತು ಸುಭಾಷ್ ಎಂಬವರು ಹಲ್ಲೆ ನಡೆಸಿದ್ದರು. ಈ ಇಬ್ಬರಿಗೆ ಹಲ್ಲೆ ಮಾಡಲು ಹೇಳಿದ್ದು ಧ್ರುವ ಆಪ್ತ ನಾಗೇಂದ್ರ. ಈತನಿಗೆ ಸಾಥ್ ನೀಡಿದ್ದು ಇನ್ನೊಬ್ಬ ಆಪ್ತ ಅಶ್ವಿನ್ ಎನ್ನಲಾಗಿದೆ.

ಈ ಪ್ರಕರಣದ ಹಿನ್ನಲೆಯೇ ರೋಚಕವಾಗಿದೆ. ಪ್ರಶಾಂತ್ ಪೂಜಾರಿ ಕೂಡಾ ಧ್ರುವಗೆ ಆಪ್ತರಾಗಿದ್ದರು. ಆದರೆ ಧ್ರುವ ಜೊತೆ ಪ್ರಶಾಂತ್ ಆಪ್ತರಾಗಿರುವುದನ್ನು ಈ ಮೂವರು ಆರೋಪಿಗಳು ಸಹಿಸಿರಲಿಲ್ಲ. ಈ ಕಾರಣಕ್ಕೆ ಪ್ಲ್ಯಾನ್ ಮಾಡಿ ಹಲ್ಲೆ ನಡೆಸಿದ್ದರು. ಇದೇ ಹರ್ಷ ಹುಟ್ಟುಹಬ್ಬಕ್ಕೆ ಕಳೆದ ವರ್ಷ ಧ್ರುವ ಕಾರು ಗಿಫ್ಟ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಈ ವ್ಯಕ್ತಿಗಳೇ ಈಗ ಹಲ್ಲೆ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ