ಸಲಾರ್ ರಿಲೀಸ್ ದಿನಾಂಕ ಬಹಿರಂಗಪಡಿಸದಿದ್ದರೆ ಆತ್ಮಹತ್ಯೆ ಬೆದರಿಕೆ

ಸೋಮವಾರ, 16 ಮೇ 2022 (16:34 IST)
ಹೈದರಾಬಾದ್: ಕೆಜಿಎಫ್  ಬಳಿಕ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ಸಲಾರ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಗೆ ಅಭಿಮಾನಿಯೊಬ್ಬರಂತೂ ತಮ್ಮ ಅಭಿಮಾನದ ಅತಿರೇಕ ಪ್ರದರ್ಶಿಸಿದ್ದಾರೆ. ಸಲಾರ್ ಬಿಡುಗಡೆ ದಿನಾಂಕ ಘೋಷಣೆ ಮಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಇದೇ ತಿಂಗಳು ಸಲಾರ್ ಬಿಡುಗಡೆ ದಿನಾಂಕ ಪ್ರಕಟಿಸಬೇಕು, ಇಲ್ಲದೇ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತಾ ಎಂದು ಅಭಿಮಾನಿ ಕೆಂಪು ಅಕ್ಷರಣದಲ್ಲಿ ಪತ್ರ ಬರೆದಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ