ತಿರುಪತಿ ತಿಮ್ಮಪ್ಪನಿಗೆ ವಿಶೇಷ ಹರಕೆ ತೀರಿಸಿದ ಶಿವರಾಜ್ ಕುಮಾರ್ ಪತ್ನಿ

ಶನಿವಾರ, 14 ಡಿಸೆಂಬರ್ 2019 (08:50 IST)
ಬೆಂಗಳೂರು: ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಹರಕೆ ತೀರಿಸಿದ್ದು, ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ.


ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣ  ಪುಟದಲ್ಲಿ ಪ್ರಕಟಿಸಿರುವ ಶಿವರಾಜ್ ಕುಮಾರ್ 2019 ರಲ್ಲಿ ಬಂದ ಎಲ್ಲಾ ಕಷ್ಟಗಳ ಸಂದರ್ಭ ಕೈ ಹಿಡಿದ ತಿಮ್ಮಪ್ಪನಿಗೆ ಭಕ್ತಿಯಿಂದ ಅರ್ಪಣೆ ಎಂದು ಬರೆದುಕೊಂಡಿದ್ದಾರೆ.

ಈ ವರ್ಷ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಅಲ್ಲದೆ, ಶಿವರಾಜ್ ಕುಮಾರ್ ಭುಜದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಈ ಎಲ್ಲಾ ಸಮಸ್ಯೆಗಳ ಸಂದರ್ಭದಲ್ಲಿ ಕೈಹಿಡಿದ ತಿಮ್ಮಪ್ಪನಿಗೆ ಗೀತಾ ಶಿವರಾಜ್ ಕುಮಾರ್ ತಮ್ಮ ಹರಕೆ ಪೂರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ