ರಿಷಬ್ ಶೆಟ್ಟಿ ಹರಿಕತೆ ಸಿನಿಮಾದಿಂದ ಹೊರಬಂದ ನಿರ್ದೇಶಕ ಗಿರಿಕೃಷ್ಣ

ಬುಧವಾರ, 2 ಡಿಸೆಂಬರ್ 2020 (09:41 IST)
ಬೆಂಗಳೂರು: ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ ಗಿರಿಕತೆ ಸಿನಿಮಾದ ನಿರ್ದೇಶಕರು ಬದಲಾಗಿದ್ದಾರೆ. ನಿರ್ದೇಶಕರ ಗಿರಿಕೃಷ್ಣ ಚಿತ್ರದಿಂದ ಹೊರಬಂದಿದ್ದಾರೆ.


ಈಗಾಗಲೇ ಶೂಟಿಂಗ್ ಆರಂಭಿಸಿರುವ ಹರಿಕತೆ ಸಿನಿಮಾವನ್ನು ಗಿರಿಕೃಷ್ಣ ಅರ್ಧದಲ್ಲೇ ಬಿಟ್ಟು ಹೊರಬರಲು ಕಾರಣ ಆರೋಗ್ಯ ಸ್ಥಿತಿ. ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಗಿರಿಕೃಷ್ಣಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಚೇತರಿಸಿಕೊಳ್ಳಲು ಕೆಲವು ದಿನ ಬೇಕಾಗುತ್ತದೆ. ಆದರೆ ಅಷ್ಟು ದಿನ ಚಿತ್ರೀಕರಣ ಮುಂದೂಡಿದರೆ ಕಲಾವಿದರಿಗೆ ತೊಂದರೆಯಾಗುತ್ತದೆ. ಇದೇ ಕಾರಣಕ್ಕೆ ನಿರ್ದೇಶಕರೇ ಬದಲಾಗಿದ್ದಾರೆ. ಸದ್ಯಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಜವಾಬ್ಧಾರಿ ಹೊತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ