ಕಾಶೀನಾಥ್ ಬಗ್ಗೆ ಚೌಕ ನಿರ್ದೇಶಕರು ಬಿಚ್ಚಿಟ್ಟ ಸತ್ಯ!

ಗುರುವಾರ, 18 ಜನವರಿ 2018 (10:18 IST)
ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಇನ್ನಿಲ್ಲ ಎಂಬುದು ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ದೊಡ್ಡ ನಷ್ಟ. ಅವರು ಕೊನೆಯದಾಗಿ ನಟಿಸಿದ ಚೌಕ ಚಿತ್ರದ ಸಂದರ್ಭದಲ್ಲಿಯೇ ಅವರಿಗೆ ಕ್ಯಾನ್ಸರ್ ರೋಗವಿತ್ತಂತೆ!
 

ಹಾಗಂತ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಚೌಕ ಚಿತ್ರವನ್ನು ಒಪ್ಪಿಕೊಂಡಿದ್ದರು.

ಅವರು ಚಿತ್ರೀಕರಣದ ದಿನಗಳಲ್ಲಿ ಆಗಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದರು. ಹಾಗಿದ್ದರೂ ಒಂದು ದಿನವೂ ಚಿತ್ರೀಕರಣಕ್ಕೆ ತೊಂದರೆ ಮಾಡಿಲ್ಲ. ಅಚ್ಚುಕಟ್ಟಾಗಿ ತಮ್ಮ ಪಾತ್ರಕ್ಕೆ ಸಿದ್ಧರಾಗಿ ಬರುತ್ತಿದ್ದರು. ಕ್ಯಾನ್ಸರ್ ಇದೆ ಎಂದು ಗೊತ್ತಿದ್ದರೂ ಲವಲವಿಕೆಯಿಂದಲೇ ಇದ್ದ ವ್ಯಕ್ತಿ ಎಂದು ತರುಣ್ ಸುಧೀರ್ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ