ಇಂದಿನಿಂದ ಕೆಸಿಸಿ ಕ್ರಿಕೆಟ್ ಕದನ: ಕಿಚ್ಚ, ಶಿವಣ್ಣನ ಕ್ರಿಕೆಟ್ ಖದರ್

ಶುಕ್ರವಾರ, 24 ಫೆಬ್ರವರಿ 2023 (09:00 IST)
ಬೆಂಗಳೂರು: ಸಿನಿಮಾ, ಕ್ರಿಕೆಟ್ ಫ್ಯಾನ್ಸ್ ಗೆ ಇಂದು ಮತ್ತು ನಾಳೆ ಹಬ್ಬವಾಗಲಿದೆ. ಇಂದಿನಿಂದ ಕೆಸಿಸಿ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 6 ತಂಡಗಳನ್ನೊಳಗೊಂಡ ಕೆಸಿಸಿ ಕಪ್ ನಡೆಯಲಿದೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಗಣೇಶ್, ಧ್ರುವ ಸರ್ಜಾ, ಡಾಲಿ ಧನಂಜಯ್, ಉಪೇಂದ್ರ ಅವರ ನಾಯಕತ್ವದ ತಂಡಗಳು ಕಣಕ್ಕಿಳಿಯಲಿವೆ.

ಮೊನ್ನೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟ ಶುರುವಾಗಿದೆ. ಇಂದು ಮತ್ತು ನಾಳೆ ಟೂರ್ನಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ನಡೆಯಲಿದೆ. 3 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ