ಕುದ್ರೋಳಿ ದೇವಾಲಯಕ್ಕೆ ನಟ ಕಿಚ್ಚ ಸುದೀಪ್

ಶುಕ್ರವಾರ, 10 ಡಿಸೆಂಬರ್ 2021 (10:38 IST)
ಮಂಗಳೂರು: ಬಂದರು ನಗರಿ ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ನಟ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ.

ಕರಾವಳಿ ಪ್ರವಾಸದಲ್ಲಿರುವ ನಟ ಸುದೀಪ್ ತಮ್ಮ ಸಂಗಡಿಗರೊಂದಿಗೆ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕಿಚ್ಚನಿಗೆ ದೇವಾಲಯ ಸಿಬ್ಬಂದಿ ಗೌರವಿಸಿತು.

2022 ರ ಫೆಬ್ರವರಿಯಲ್ಲಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾವನ್ನೂ ಕರಾವಳಿಯವರೇ ಆದ ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ