ರೌಡಿಗಳನ್ನ ಬೇಟೆಯಾಡಿದ ರೋಚಕ ಸಂಗತಿ ಬಿಚ್ಚಿಟ್ಟ ರವಿ ಡಿ ಚೆನ್ನಣ್ಣನವರ್

ಶನಿವಾರ, 29 ಏಪ್ರಿಲ್ 2017 (11:37 IST)
ಕನ್ನಡದ ಮಟ್ಟಿಗೆ ವೀಕೆಂಡ್ ವಿತ್ ರಮೇಶ್ ಅತ್ಯಂತ ಜನಪ್ರಿಯ ಕಾರ್ಯಕ್ರಮ ಸಿನಿಮಾ ಸಾಧಕರೇ ಹೆಚ್ಚಾಗಿ ಕಂಡುಬರುವ ಈ ಕಾರ್ಯಕ್ರಮದಲ್ಲಿ ಈ ವಾರ ಕರ್ನಾಟಕದ ಸಿಗಂ ಎಂದೇ ಖ್ಯಾತರಾದ ಮೈಸೂರು ಎಸ್`ಪಿ ರವಿ ಡಿ ಚೆನ್ನಣ್ಣನವರ್ ಕಾಣಿಸಿಕೊಳ್ಳುತ್ತಿದ್ದಾರೆ.

ದಿನಗೂಲಿ, ಬಾರ್ ವೇಟರ್ ಅಗಿ ಕಷ್ಟ ಪಟ್ಟು ಮೇಲೆ ಬಂದಿರುವ ಖಡಕ್ ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಜೀವನ ಚರಿತ್ರೆ ವೀಕೆಂಡ್`ನಲ್ಲಿ ರಿವೈಂಡ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಕಾರ್ಯಾಚರಣೆ ಕುರಿತ ಕುತೂಹಲಕಾರಿ ವಿಷಯವೊಂದನ್ನ ಅವರೇ ಬಿಚ್ಚಿಟ್ಟಿದ್ದಾರೆ. ನೂರಾರು ರೌಡಿಗಳು ವೆಪನ್ ಹಿಡಿದು ನಿಂತಿದ್ದಾಗ ಈ ಪೊಲೀಸ್ ಅಧಿಕಾರಿ ಮಾಡಿದ್ದೇನು..? ಅವರ ಮಾತುಗಳಲ್ಲೇ ಕೇಳಿ. 

ವಿಡಿಯೋ ಕೃಪೆ: ಜೀ ಕನ್ನಡ




ವೆಬ್ದುನಿಯಾವನ್ನು ಓದಿ