ದಿಡೀರ್ ಆಗಿ ಪೂಜಾ ಗಾಂಧಿ-ಅನಿಲ್ ಮೆಣಸಿನಕಾಯಿ ಕೇಸ್ ಕ್ಲೋಸ್ ಆಗಿದ್ದು ಹೇಗೆ?!

ಬುಧವಾರ, 20 ಮಾರ್ಚ್ 2019 (09:44 IST)
ಬೆಂಗಳೂರು: ಬಿಲ್ ಪಾವತಿ ಮಾಡಿಲ್ಲವೆಂದು ದಿ ಲಲಿತ್ ಅಶೋಕ್ ಹೋಟೆಲ್ ಸಿಬ್ಬಂದಿ ನಟಿ ಪೂಜಾ ಗಾಂಧಿ ಮತ್ತು ಬಿಜೆಪಿ ನಾಯಕ ಅನಿಲ್ ಮೆಣಸಿನಕಾಯಿ ವಿರುದ್ಧ ದಾಖಲಿಸಿದ್ದ ಕೇಸ್ ಇದೀಗ ದಿಡೀರ್ ಆಗಿ ಮುಕ್ತಾಯ ಕಂಡಿದೆ!


ಸುಮಾರು ಮೂರೂವರೆ ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದ ಆರೋಪದಲ್ಲಿ ಪೂಜಾ ಗಾಂಧಿ ಮತ್ತು ಅನಿಲ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಬ್ಬರಿಗೂ ಕರೆ ಮಾಡಿ ಬಿಲ್ ಪಾವತಿ ಮಾಡುವಂತೆ ಕೇಳಿಕೊಂಡರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಹೋಟೆಲ್ ಸಿಬ್ಬಂದಿ ಪೊಲೀಸ್ ದೂರು ನೀಡಿದ್ದರು.

ಆದರೆ ಇಬ್ಬರೂ ಮಾಧ್ಯಮಗಳಿಗೆ ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದೇ ವಾದಿಸಿದ್ದರು. ಈ ಕುರಿತು ಅಸಂಜ್ಞೆಯ ದೂರು ದಾಖಲಿಸಿದ ಪೊಲೀಸರು ಇಬ್ಬರಿಂದಲೂ ಮಾಹಿತಿ ಪಡೆದುಕೊಂಡರು. ಬಳಿಕ ಅನಿಲ್ ಮೆಣಸಿನಕಾಯಿ ಹೋಟೆಲ್ ನವರಿಗೆ ಬಾಕಿ ಮೊತ್ತ ಪಾವತಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಅಂಸಜ್ಞೆಯ ದೂರು ಮುಕ್ತಾಯ ಕಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ