ದರ್ಶನ್ ತಾಯಿ ನನಗೆ ಕೈ ತುತ್ತು ನೀಡಿದ್ದರು: ಪ್ರೇಮ್ ನೋವಿನ ಮಾತು

ಭಾನುವಾರ, 18 ಜುಲೈ 2021 (10:47 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದ್ರಜಿತ್ ಜೊತೆಗಿನ ಮಾತಿನ ಚಕಮಕಿಯಲ್ಲಿ ತಮ್ಮ ಹೆಸರು ಹೇಳಿದ್ದಕ್ಕೆ ದರ್ಶನ್ ವಿರುದ್ಧ ನಿರ್ದೇಶಕ ಪ್ರೇಮ್ ಅಸಮಾಧಾನಗೊಂಡಿದ್ದರು.


ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ದರ್ಶನ್ ಹೇಳಿಕೆ ಅಸಮಾಧಾನ ಹೊರಹಾಕಿದ್ದರು. ಇದೀಗ ತಮ್ಮ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರೇಮ್, ಕರಿಯ ಸಿನಿಮಾ ಸಂದರ್ಭದಲ್ಲಿ ಅವರ ಮನೆಗೆ ಹೋಗಿದ್ದೆ. ದರ್ಶನ್ ತಾಯಿ ನನಗೆ ಕೈ ತುತ್ತು ನೀಡಿದ್ದರು.

ದರ್ಶನ್ ನನಗೆ, ರಕ್ಷಿತಾಗೆ ಆತ್ಮೀಯರು. ಆದರೆ ಅವರು ನಿನ್ನೆ ನಿರ್ದೇಶಕರ ಬಗ್ಗೆ ಹಾಗೆ ಹೇಳಿದ್ದು ಸರಿಯಲ್ಲ. ಅದು ನನಗೆ ನೋವುಂಟು ಮಾಡಿತ್ತು. ಆ ವಿಚಾರಕ್ಕಷ್ಟೇ ನಾನು ಪೋಸ್ಟ್ ಹಾಕಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ