ಪುನೀತ್ ಸಾವಿನಲ್ಲೂ ಲಾಭ ಪಡೆದರಾ ರಜನೀಕಾಂತ್? ಅಪ್ಪು ಫ್ಯಾನ್ಸ್ ಗರಂ

ಗುರುವಾರ, 11 ನವೆಂಬರ್ 2021 (09:40 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಕೊನೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೂ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ.

ರಜನೀಕಾಂತ್ ಇಷ್ಟು ದಿನ ಪುನೀತ್ ಸಾವಿನ ಬಗ್ಗೆ ಒಂದೇ ಒಂದು ಹೇಳಿಕೆ ನೀಡದೇ ಇದ್ದಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಸಂತಾಪ ವ್ಯಕ್ತಪಡಿಸಿದ ಮೇಲೂ ಫ್ಯಾನ್ಸ್ ಗರಂ ಆಗಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ?

ರಜನಿ ತಮ್ಮ ಪುತ್ರಿ ಐಶ್ವರ್ಯಳ ಹೂಟೆ ಆಪ್ ಮೂಲಕ ಪುನೀತ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  ಈ ಮೂಲಕ ಪುನೀತ್ ಸಾವಿಗೆ ಕಂಬನಿ ವ್ಯಕ್ತಪಡಿಸಿ ಮಗಳ ಆಪ್ ಗೆ ಪ್ರಚಾರ ಗಿಟ್ಟಿಸಿಕೊಂಡರು ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ