ಅವನೇ ಶ್ರೀಮನ್ನಾರಾಯಣದಲ್ಲಿ ರಿಷಬ್ ಶೆಟ್ಟಿ ಸರ್ಪ್ರೈಸ್ ಅತಿಥಿ!

ಶುಕ್ರವಾರ, 29 ನವೆಂಬರ್ 2019 (09:31 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ. ರಕ್ಷಿತ್ ಇದ್ದ ಕಡೆ ರಿಷಬ್ ಇರಲೇಬೇಕಲ್ಲ? ಈಗ ಅವನೇ ಶ್ರೀಮನ್ನಾರಾಯಣದಲ್ಲೂ ರಿಷಬ್ ಅತಿಥಿ ಪಾತ್ರ ಮಾಡಿದ್ದಾರೆ. ಇದು ನಿಜಕ್ಕೂ ಸರ್ಪ್ರೈಸ್.


ಇದುವರೆಗೆ ರಿಷಬ್ ಪಾತ್ರ ಮಾಡುವ ಬಗ್ಗೆ ಚಿತ್ರತಂಡ ಎಲ್ಲೂ ಮಾಹಿತಿ ಕೊಟ್ಟಿರಲಿಲ್ಲ. ಆದರೆ ಟ್ರೈಲರ್ ಲಾಂಚ್ ವೇಳೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.

ರಕ್ಷಿತ್ ಶೆಟ್ಟಿ ಇರುವಲ್ಲಿ ನಾನಿರಲೇಬೇಕಲ್ಲಾ? ಎಂದು ಮಾತು ಶುರು ಮಾಡಿದ ರಿಷಬ್, ಅವನ ಒತ್ತಾಯದಿಂದಲೇ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದೆ. ನಾನು ಕೌ ಬಾಯ್ ಕೃಷ್ಣ ಎಂಬ ಪಾತ್ರ ಮಾಡಿದ್ದೇನೆ. ನನ್ನ ಪಾತ್ರ ಮಾತ್ರ ಇಲ್ಲಿ ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿದಿದ್ದು. ಇದುವರೆಗೆ ನಾನು ಎಲ್ಲೂ ಹೇಳಿಕೊಂಡಿರಲಿಲ್ಲ ಎಂದು ನಗುತ್ತಲೇ ರಿಷಬ್ ತಾವೂ ಪಾತ್ರ ಮಾಡಿರುವುದನ್ನು ಒಪ್ಪಿಕೊಂಡರು. ಅಲ್ಲದೆ ತಮ್ಮ ಗೆಳೆಯ ರಕ್ಷಿತ್ ಕನಸಿಗೆ ಶುಭ ಹಾರೈಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ