ಕೊಡಗಿಗೆ ತಲುಪಿತು ರಾಕಿಂಗ್ ಸ್ಟಾರ್ ಯಶ್ ಮಾಡಿದ ಒಳ್ಳೆ ಕೆಲಸ!

ಮಂಗಳವಾರ, 21 ಆಗಸ್ಟ್ 2018 (09:21 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಲವು ಬಾರಿ ತಾವು ನಿಜ ಜೀವನದಲ್ಲೂ ಹೀರೋ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇದೀಗ ಕೊಡಗು ಪ್ರವಾಹ ವಿಚಾರದಲ್ಲೂ ಅದನ್ನೇ ಮಾಡಿದ್ದಾರೆ.

ಯಶೋಮಾರ್ಗ ಎನ್ನುವ ತಮ್ಮದೇ ಸಾಮಾಜಿಕ ಸಂಸ್ಥೆ ಹೊಂದಿರುವ ಯಶ್ ಇದರ ಮೂಲಕ ಕೊಡಗು ಪ್ರವಾಹ ಪೀಡಿತರ ಸಹಾಯಕ್ಕೆ ಕೈ ಚಾಚಿದ್ದಾರೆ. ತಮ್ಮ ತಂಡದ ಹುಡುಗರನ್ನು ಅಗತ್ಯ ವಸ್ತುಗಳ ಸಮೇತ ಕೊಡಗಿಗೆ ಕಳುಹಿಸಿದ್ದಾರೆ ರಾಕಿಂಗ್ ಸ್ಟಾರ್.

ಈ ಬಳಗ ನೆರೆ ಸಂತ್ರಸ್ತರಿಗೆ ಆಹಾರ, ಅಗತ್ಯ ವಸ್ತುಗಳನ್ನು ಪೂರೈಸುವುದಷ್ಟೇ ಅಲ್ಲದೆ, ಅವರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಲು ಸಹಾಯವನ್ನೂ ಮಾಡಲಿದೆ. ರಾಕಿಂಗ್ ಸ್ಟಾರ್ ನ ಈ ಒಳ್ಳೆ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ