ಕಂಠೀರವ ಸ್ಟುಡಿಯೋ ಸುತ್ತಮುತ್ತ ಸೆಕ್ಷನ್ 144 !

ಭಾನುವಾರ, 31 ಅಕ್ಟೋಬರ್ 2021 (09:47 IST)
ಬೆಂಗಳೂರು : ಕನ್ನಡ ಚಿತ್ರರಂಗದ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ವ್ಯವಸ್ಥಿತವಾಗಿ ನಡೆದಿದೆ. ಕರ್ನಾಟಕ ಸರ್ಕಾರದ ಸಕಲ ಗೌರವ ಸಲ್ಲಿಸಿದ್ದೇವೆ.
ಕುಟುಂಬಸ್ಥರು ವಿಧಿ ವಿಧಾನ ಮಾಡಿದ್ದಾರೆ. ಎಲ್ಲಾರಿಗೂ ದುಖಃವಾಗಿದೆ. ಆದರೂ ಸಹಕಾರ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಬಿಬಿಎಂಪಿ, ಪೊಲೀಸ್ ಸಿಬ್ಬಂದಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
ಸದ್ಯಕ್ಕೆ ಕಂಠೀರವ ಸ್ಟುಡಿಯೋ ಒಳಗೆ ಪ್ರವೇಶ ನಿರ್ಬಂಧ ಇದೆ. ಸೆಕ್ಷನ್ 144 ಜಾರಿ ಮಾಡುತ್ತೇವೆ. ಸ್ಥಳೀಯ ಡಿಸಿಪಿಯವರು ಈ ಆದೇಶವನ್ನು ಮಾಡುತ್ತಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ