ಇಬ್ಬರು ಹೀರೋಗಳಾದರೆ ತೊಂದರೆಯೇನು ಎಂದ ಶಾಹಿದ್ ಕಪೂರ್

ಸೋಮವಾರ, 24 ಅಕ್ಟೋಬರ್ 2016 (11:50 IST)
ಮುಂಬೈ: ಬಾಲಿವುಡ್ ನ ಚಾಕಲೇಟ್ ಹೀರೋ ಶಾಹಿದ್ ಕಪೂರ್  ಇಬ್ಬರು ಹೀರೋಗಳಿರುವ ಚಿತ್ರದಲ್ಲಿ ಅಭಿನಯಿಸುವುದಕ್ಕೆ ನನಗೇನು ತೊಂದರೆಯಿಲ್ಲ ಎಂದಿದ್ದಾರೆ.

ಮುಂಬರುವ “ಪದ್ಮಾವತಿ” ಎಂಬ ಐತಿಹಾಸಿಕ ಚಿತ್ರದಲ್ಲಿ ಅವರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ಆದರೆ ರಣವೀರ್ ಜತೆ ಶಾಹಿದ್ ಗೆ ಎಲ್ಲವೂ ಸರಿಯಿಲ್ಲ. ಇವರಿಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದೆಲ್ಲಾ ವರದಿಯಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಶಾಹಿದ್ “ಇದರಲ್ಲಿ ಸಮಸ್ಯೆಯೇನಿದೆ. ನಮಗೆ ಮೂವರಿಗೂ ಇದೊಂದು ಉತ್ತಮ ಅವಕಾಶ. ನಮಗೆ ಮೂವರಿಗೂ ಪ್ರಮುಖ ಪಾತ್ರವಿದೆ.  ನನಗೆ ನನ್ನ ಪಾತ್ರ ಮತ್ತು ಸಿನಿಮಾ ಬಗ್ಗೆ ಖುಷಿಯಿದೆ. ಈ ಬಗ್ಗೆ ಸುಮ್ಮನೇ ಸುದ್ದಿ ಹರಡಲಾಗುತ್ತಿದೆ” ಎಂದು ಶಾಹಿದ್ ಹೇಳಿಕೊಂಡಿದ್ದಾರೆ.

ಪದ್ಮಾವತಿ ಚಿತ್ರದಲ್ಲಿ ರಣವೀರ್ ಸಿಂಗ್, ಶಾಹಿದ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟಿಸುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಕರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ