ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ ಜನರ ಕಷ್ಟಕ್ಕೆ ನೆರವಾದ ಶುಭಾ ಪೂಂಜಾ

ಶನಿವಾರ, 15 ಮೇ 2021 (10:37 IST)
ಬೆಂಗಳೂರು: ಕೊರೋನಾದಿಂದಾಗಿ ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿ ಅರ್ಧಕ್ಕೇ ರದ್ದಾಗಿತ್ತು. ಮನೆಯಿಂದ ಹೊರಬರುವ ಮೊದಲು ಶುಭಾ ಪೂಂಜಾ ಸೇರಿದಂತೆ ಸ್ಪರ್ಧಿಗಳು ಕೊರೋನಾ ವಾರಿಯರ್ ಗಳಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದರು.

 

ಇದನ್ನೀಗ ಶುಭಾ ಪೂಂಜಾ ಮಾಡಿ ತೋರಿಸಿದ್ದಾರೆ. ಶುಭಾ ಪೂಂಜಾ ತಮ್ಮ ಮನೆಯ ಅಕ್ಕಪಕ್ಕವಿರುವ ಬಡ ಕಾರ್ಮಿಕರು, ಬಡವರಿಗೆ ರೇಷನ್ ಕಿಟ್ ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ನನ್ನಿಂದಾದ ಪುಟ್ಟ ಸಹಾಯವನ್ನು ಮಾಡುತ್ತಿದ್ದೇನೆ. ನನ್ನ ಮನೆಯ ಪಕ್ಕದಲ್ಲೇ ಇರುವ ಬಡವರಿಗೆ ರೇಷನ್ ಕಿಟ್ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಶುಭಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದ ನಟಿಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ