ನಟಿಗೆ ಕಾರಿನಲ್ಲಿ ಲೈಂಗಿಕ ಕಿರುಕುಳ: ಕಿಚ್ಚ ಸುದೀಪ್ ಕಿಡಿ

ಭಾನುವಾರ, 19 ಫೆಬ್ರವರಿ 2017 (17:56 IST)
ಕೇರಳದಲ್ಲಿ ನಟಿ ಮೇಲೆ ನಡೆದಿದೆ ಎನ್ನಲಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಖ್ಯಾತನ ನಟ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಸುದೀಪ್, ನಾನು ಕೇಳಿದ ಸುದ್ದಿ ನಿಜವೇ ಆದಲ್ಲಿ ಅಂತಹ ಕಾಮುಕರಿಗೆ ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ. 


ಆ ನೋವು ಏನೆಂಬುದನ್ನ ಆ ಮಹಿಳೆ ಮಾತ್ರ ಬಲ್ಲಳು. ಇದು ನಿಜವೆಂದು ಸಾಬೀತಾದರೆ ಅಂತಹವರನ್ನ ಗುಂಡಿಕ್ಕಿ ಕೊಲ್ಲಬೇಕು. ಇಂತಹ ಕಾಮುಕರು ಅವರ ತಾಯಿಗೂ ಮರ್ಯಾದೆ ಕೊಡುವುದಿಲ್ಲ. ಇದು ಕೇವಲ ನಟಿಯ ವಿಷಯವಲ್ಲ. ಮಹಿಳೆಯ ದೈಹಿಕ ದೌರ್ಬಲ್ಯವನ್ನ ದುರುಪಯೋಗಪಡಿಸಿಕೊಳ್ಳುವವರು ಮನುಷ್ಯರಲ್ಲ ಎಂದು ಸುದೀಪ್ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ