ಪುನೀತ್ ಬಗ್ಗೆ ಪೊನ್ನಿಯನ್ ಸೆಲ್ವನ್ ವೇದಿಕೆಯಲ್ಲಿ ತ್ರಿಶಾ ಹೇಳಿದ್ದೇನು?

ಶುಕ್ರವಾರ, 23 ಸೆಪ್ಟಂಬರ್ 2022 (09:10 IST)
ಬೆಂಗಳೂರು: ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾದ ಪ್ರಚಾರಾರ್ಥವಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಚಿತ್ರತಂಡದ ಜೊತೆಗೆ ನಾಯಕಿ ತ್ರಿಶಾ ಕೃಷ್ಣನ್ ಕೂಡಾ ವೇದಿಕೆಯಲ್ಲಿದ್ದರು.

ತ್ರಿಶಾ ಈಗಾಗಲೇ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾವೊಂದನ್ನು ಮಾಡಿದ್ದರು. ಜೊತೆಗೆ ಪುನೀತ್ ಅಭಿನಯಿಸಬೇಕಿದ್ದ ದ್ವಿತ ಸಿನಿಮಾಗೂ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದರು. ದುರದೃಷ್ಟವಶಾತ್ ಸಿನಿಮಾ ಸೆಟ್ಟೇರುವ ಮೊದಲೇ ಪುನೀತ್ ತೀರಿಕೊಂಡರು.

ನಿನ್ನೆ ವೇದಿಕೆಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ತ್ರಿಶಾ ‘ಕಳೆದ ಬಾರಿ ಬೆಂಗಳೂರಿಗೆ ಬಂದಿದ್ದು ಪವರ್ ಸಿನಿಮಾ ಶೂಟಿಂಗ್ ಗಾಗಿ. ನಾನು ಪುನೀತ್ ಸರ್ ನ್ನು ನಾನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. ದ್ವಿತದಲ್ಲಿ ನಾನು ಪುನೀತ್ ಸರ್ ಜೊತೆ ಕೆಲಸ ಮಾಡಬೇಕಿತ್ತು. ಆದರೆ ಅದು ಸಾಧ‍್ಯವಾಗಲೇ ಇಲ್ಲ. ಪುನೀತ್ ನಿಧನ ಸುದ್ದಿ ನನಗೂ ಆಘಾತ ತಂದಿತ್ತು’ ಎಂದು ಕನ್ನಡ, ತಮಿಳು ಮಿಶ್ರಿತ ಭಾಷೆಯಲ್ಲಿ ಮಾತನಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ