ಪ್ರಕಾಶ್ ರೈಗೆ ಕಿಚ್ಚ ಸುದೀಪ್ ಈ ಬಿರುದು ಕೊಟ್ಟಿದ್ದೇಕೆ?!

ಸೋಮವಾರ, 5 ಫೆಬ್ರವರಿ 2018 (11:39 IST)
ಬೆಂಗಳೂರು: ಸದಾ ಬಲಪಂಥೀಯ ವಿರೋಧಿ ಹೇಳಿಕೆಗಳಿಂದಲೇ ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಪ್ರಕಾಶ್ ರೈ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.  ಅದಕ್ಕೆ ಕಿಚ್ಚ ಸುದೀಪ್ ಕೂಡಾ ಹೊಗಳಿದ್ದಾರೆ.
 

ಪ್ರಕಾಶ್ ರೈ ಬರೆದ ಇರುವುದೆಲ್ಲವ ಬಿಟ್ಟು.. ಎಂಬ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಶುಭ ಹಾರೈಸಿರುವ ಕಿಚ್ಚ, ಬಹುಭಾಷಾ ತಾರೆಗೆ ಹೊಸದೊಂದು ಬಿರುದನ್ನೂ ಕೊಟ್ಟಿದ್ದಾರೆ.

ಪ್ರಕಾಶ್ ರೈ ನಡೆದಾಡುವ ಹಾರ್ಡ್ ಡಿಸ್ಕ್ ಎಂದು ಕಿಚ್ಚ ಸುದೀಪ್ ಕೊಂಡಾಡಿದ್ದಾರೆ. ಪುಸ್ತಕದ ಯಶಸ್ಸಿಗೆ ಶುಭ ಕೋರಿದ ಕಿಚ್ಚ ಸುದೀಪ್, ಪ್ರಕಾಶ್ ರೈ ಎಂದರೆ ಜ್ಞಾನ, ಪ್ರತಿಭೆಯ ಬಂಡಾವಿದ್ದಂತೆ ಎಂದು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ