ವಿಷ್ಣುವರ್ಧನ್ ಹೊಸ ಮನೆಯಲ್ಲಿ ಕೃಷ್ಣನ ಗುಡಿಯಿದೆ ಯಾಕೆ?

ಸೋಮವಾರ, 28 ನವೆಂಬರ್ 2022 (08:40 IST)
Photo Courtesy: Instagram
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಹೊಸ ಮನೆಯ ಪ್ರವೇಶೋತ್ಸವ ನಿನ್ನೆ ಅದ್ಧೂರಿಯಾಗಿ ನೆರವೇರಿತ್ತು.

ಹೊಸ ವಿನ್ಯಾಸದೊಂದಿಗೆ ವಿಷ್ಣು ಕನಸಿನ ಮನೆ ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ. ಈ ಮನೆಗೆ ವಲ್ಮೀಕ ಎಂದು ಹೆಸರಿಡಲಾಗಿದೆ. ಮನೆಯ ಆವರಣದಲ್ಲೇ ಕೃಷ್ಣನಿಗೆ ಪುಟ್ಟದಾದ ಗುಡಿಯಿದೆ. ಇದಕ್ಕೆ ಕಾರಣವೇನೆಂದು ವಿಷ್ಣು ದಾದ ಪುತ್ರಿ ಕೀರ್ತಿ ವಿಷ್ಣುವರ್ಧನ್ ವಿವರಿಸಿದ್ದಾರೆ.

‘ತಂದೆಗೆ ಕೃಷ್ಣನೆಂದರೆ ಭಾರೀ ಪ್ರೀತಿ. ಈ ಕಾರಣಕ್ಕೆ ಮನೆಯ ಆವರಣದಲ್ಲಿ ಕೃಷ್ಣನ ಗುಡಿ ನಿರ್ಮಿಸಲಾಗಿದೆ ಎಂದು ಕೀರ್ತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ