ಸೀತಾನದಿ ಹರಿದಿದೆ ನೋಡಿ

ಭಾನುವಾರ, 23 ಅಕ್ಟೋಬರ್ 2016 (10:55 IST)
ಬೆಂಗಳೂರು: ಕನ್ನಡ ಸಿನಿಮಾ ಲೋಕದಲ್ಲಿ ಹೊಸದೊಂದು ಸಿನಿಮಾ ಬಿಡುಗಡೆಯಾಗಿದೆ . “ಸೀತಾ ನದಿ” ಇದರ ಹೆಸರು. ಕೆ. ಶರತ್ ಇದರ ನಿರ್ದೇಶಕರು.

ಒಬ್ಬಳು ಮುಗ್ದ ಹುಡುಗಿ. ಅಮ್ಮನ ಪ್ರೀತಿಯ ಬೆಚ್ಚನೆಯ ಗೂಡಿನಲ್ಲಿದ್ದವಳು, ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದವಳು.. ಅಕಸ್ಮಾತ್ತಾಗಿ ಅವಳ ಬದುಕಿನಲ್ಲಿ ನಡೆಯುವ ಕೆಟ್ಟ ಘಟನೆ ಅವಳ ಜೀವನವನ್ನು ಹೇಗೆ ಆಟ ಆಡಿಸುತ್ತೆ ಎನ್ನುವುದು ಚಿತ್ರದ ಸಾರಾಂಶ.

ಸೀತಾನದಿ ಚಿತ್ರದ ತಿರುಳು ಸಮಾಜದಲ್ಲಿ ಹಲವು ಕಡೆ ನಾವಿಂದು ನೋಡುವ ಸತ್ಯ ಘಟನೆಯ ಸ್ಯಾಂಪಲ್. ಹೀಗಾಗಿ ಸಿನಿಮಾ ನಮಗೊಂದು ಪಾಠವಾಗುತ್ತದೆ, ಸಂದೇಶ ಕೊಡುತ್ತದೆ. ಹಾಗಂತ ಯಾವುದನ್ನೂ ಅತಿಯಾಗಿ ವೈಭವೀಕರಿಸಿಲ್ಲ ಎನ್ನುವುದು ಮೆಚ್ಚುವಂತಹ ಅಂಶ.

ಹಳ್ಳಿಯ ಹಿನ್ನೆಲೆಯಲ್ಲಿ ಕತೆ ಸಾಗುವುದರಿಂದಲೋ ಏನೋ. ನಮಗೆ ಅಲ್ಲಿ ಬರುವ ಸಂಭಾಷಣೆಗಳು, ಅಭಿನಯ ಆಪ್ತವೆನಿಸುತ್ತದೆ. ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿದ ಅನುಭವವಿರುವುದರಿಂದ ನಾಯಕಿ ಶ್ರೇಯಾ ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಹೊನ್ನವಳ್ಳಿ ಕೃಷ್ಣ ಎಂದಿನಂತೆ ಸಹಜಾಭಿನಯದ ಮೂಲಕ ಗಮನ ಸೆಳೆಯುತ್ತಾರೆ.

ಸಮಾಜಕ್ಕೆ ಹಲವು ಸಂದೇಶಗಳನ್ನು ಕೊಡುವ ಭರದಲ್ಲಿ ಕೆಲವು ಅನಗತ್ಯ ದೃಶ್ಯಗಳು ಬಂದು ಹೋದರೆ ನೀವು ಅದನ್ನು ಕ್ಷಮಿಸಬೇಕು.  ಆದರೆ ವಾಸ್ತವಿಕತೆಯ ಕತೆಯುಳ್ಳ ಸಿನಿಮಾವನ್ನು ನೋಡಲು ಬಯಸುವವರು ಒಮ್ಮೆ ಇದನ್ನು ನೋಡಲು ಅಡ್ಡಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ