ಪ್ರೇಮಿ ಕೈಕೊಟ್ಟು ಪರಾರಿಯಾದಾಗ ಮನೆಯ ಮುಂದೆ ಧರಣಿ ಕುಳಿತಳು!

ಶನಿವಾರ, 21 ಡಿಸೆಂಬರ್ 2013 (11:45 IST)
PR
PR
ಕೊಪ್ಪಳ: ವಿವಾಹವಾಗಿದ್ದರೂ ಪರಪುರುಷನನ್ನು ಪ್ರೀತಿಸಿ ಅವನ ಜತೆ ವಾಸವಿದ್ದ ಮಹಿಳೆಯೊಬ್ಬಳಿಗೆ ಅವನೂ ಕೈಕೊಟ್ಟು ಪರಾರಿಯಾಗಿದ್ದರಿಂದ ದಿಕ್ಕುತೋಚದೇ ಪ್ರೇಮಿಯ ಮನೆಯ ಮುಂದೆ ಧರಣಿ ಕುಳಿತ ಪ್ರಸಂಗ ವರದಿಯಾಗಿದೆ. ಶರಣಪ್ಪ ಎಂಬವರ ಜತೆ ಅನ್ನಪೂರ್ಣಳ ವಿವಾಹವಾಗಿತ್ತು. ದಾಂಪತ್ಯ ಜೀವನ ಸುಗಮವಾಗಿ ಸಾಗಿದ್ದಾಗಲೇ ವೀರೇಶ್ ಎಂಬ ಯುವಕ ಎಂಟ್ರಿ ಕೊಟ್ಟು ಅವರ ದಾಂಪತ್ಯದಲ್ಲಿ ಬಿರುಕು ಸೃಷ್ಟಿಸಿದ. ವೀರೇಶ ಸದಾ ಅಣ್ಣಪೂರ್ಣಳಿಗೆ ನಾನು ನಿನ್ನನ್ನು ಪ್ರೀತಿಸುವುದಾಗಿ ಹೇಳುತ್ತಿದ್ದ. ಸದಾ ಅವಳ ಜತೆ ಮಾತನಾಡಲು ಯತ್ನಿಸುತ್ತಿದ್ದ. ಒಂದು ದಿನ ಅನ್ನಪೂರ್ಣಳ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದ. ಕೊನೆಗೆ ಹೇಗೋ ಅನ್ನಪೂರ್ಣಳನ್ನು ಬುಟ್ಟಿಗೆ ಹಾಕಿಕೊಂಡ ವೀರೇಶ್ ಸದಾ ಅವಳ ಜತೆ ಸಂಪರ್ಕ ಸಾಧಿಸಿದ್ದ.

ಒಂದು ದಿನ ವೀರೇಶ ಅನ್ನಪೂರ್ಣಳ ಜತೆ ಒಂಟಿಯಾಗಿರುವುದನ್ನು ನೋಡಿದ ಪತಿ ಶರಣಪ್ಪನ ಮನೆಯವರು ನಮ್ಮ ಕುಟುಂಬದ ಮರ್ಯಾದೆ ತೆಗೆದಳೆಂದು ದೂರಿ ಅವಳನ್ನು ಮನೆಯಿಂದ ಹೊರಗಟ್ಟಿದರು. ನಂತರ ಊರವರೆಲ್ಲ ಸೇರಿ ವೀರೇಶ್ ಜತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಒಂದು ದಿನ ವೀರೇಶ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಅನ್ನಪೂರ್ಣಗಳಿಗೆ ದಿಕ್ಕೇ ತೋಚದಂತಾಗಿದೆ. ಮುಂಚಿನ ಪತಿಯ ಮನೆಯವರು ಮತ್ತು ಗ್ರಾಮಸ್ಥರು ಅವಳು ಯಾರೆಂದು ನಮಗೆ ಗೊತ್ತೇ ಇಲ್ಲವೆನ್ನುತ್ತಾರೆ. ಇದರಿಂದ ನೊಂದ ಅನ್ನಪೂರ್ಣ ವೀರೇಶ್ ಮನೆಯ ಎದುರು ಧರಣಿ ಕುಳಿತು ಅವನ ಬರುವಿಕೆಗೆ ಕಾಯುತ್ತಿದ್ದಾಳೆ.

ವೆಬ್ದುನಿಯಾವನ್ನು ಓದಿ